Monday, July 27, 2026

ಗುರು ವಿರಕ್ತ ಮಠಗಳ ಪೂಜ್ಯರು ಹಾಗೂ ಭಕ್ತರ ನಂದಿ ಮತ ಜಾಗೃತಿಯ ಮೇಲೆ ವಿಶ್ವದ ಭವಿಷ್ಯ ನಿಂತಿದೆಯೇ?

 



ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಸಂಪೂರ್ಣವಾಗಿ ಭಾರತದಲ್ಲಿ ಸ್ಥಗಿತವಾದರೆ ಯಾವ ಗ್ರಾಮಗಳಲ್ಲಿ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಇರುವರೋ ಆ ಗ್ರಾಮಗಳಲ್ಲಿ ಕಾಯಕ ಹಾಗೂ ದಾಸೋಹ ತತ್ವಕ್ಕೆ ಧಕ್ಕೆಯಾಗದೆ ಬಹು ಜನರಿಗೆ ಒಳ್ಳೆಯ ಭವಿಷ್ಯ ಸೃಷ್ಟಿಯಾಗುತ್ತಾ ಸಾಗುವುದು. ಗುರು ವಿರಕ್ತ ಮಠಗಳು ನಂದಿ ಕೃಷಿಕರಿಂದ ಬೆಳೆಯುತ್ತಾ ಬಂದ ನಾಗರಿಕ ಸಮಾಜದಿಂದ ಜನ್ಮ ತಾಳಿವೆ ಎಂಬುದು ಮೇಲಿನ ಉದಾಹರಣೆ ಹಾಗೂ ಇತಿಹಾಸದಿಂದ ಸ್ಪಷ್ಟವಾಗಿ ತಿಳಿಯುತ್ತದೆ. ನಂದಿ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿ ಗುರು ವಿರಕ್ತ ಮಠಗಳಲ್ಲಿ ಸ್ಥಾಪಿಸಿರುವ ನಂದಿ ಮೂರ್ತಿಗಳು ನಾಗರಿಕತೆ ವಿಕಾಸವಾದ ಇತಿಹಾಸವನ್ನು ಕೂಗಿ ಹೇಳುತ್ತಿವೆ. ಐದು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ದೊಡ್ಡದಾದ ಪ್ರಕೃತಿ ವಿಕೋಪ ಘಟಿಸಿದಾಗ ಅಳಿದುಳಿದ ಜನರಿಂದ ಪುನಃ ನಾಗರಿಕತೆ ‌ನಂದಿ ಕೃಷಿ ಸಂಸ್ಕೃತಿಯಿಂದ ವಿಕಾಸವಾಗುತ್ತಾ ಬಂದಿತು. 4 ರಿಂದ 12 ನೇ ಶತಮಾನದಲ್ಲಿ ನಾಗರಿಕತೆಯ ಬೆಳವಣಿಗೆ ಉತ್ತುಂಗ ಸ್ಥಿತಿಗೆ ತಲುಪಿತು. ಅದೇ ಕಾರಣಕ್ಕೆ ಆಗಮ ಶಾಸ್ತ್ರ ಆಧಾರಿತವಾಗಿ ಅನೇಕ ಶಿವಾಲಯಗಳನ್ನು ನಿರ್ಮಿಸಲಾಯಿತು. ನಾಗರಿಕತೆ ಎಲ್ಲಿಂದ ಎಲ್ಲಿಯವರೆಗೆ ಬೆಳೆಯುತ್ತಾ ಬಂದಿದೆ ಎಂಬುದನ್ನು ದೇವಾಲಯಗಳು ಹಾಗೂ ಕಲೆಯ ಮೂಲಕ ತಿಳಿಸುವ ವಿದ್ಯೆಯೇ ಆಗಮ ಶಾಸ್ತ್ರವಾಗಿದೆ. 

12ನೇ ಶತಮಾನದ ವರೆಗೆ ನಾಗರಿಕತೆ ಬೆಳೆಯುತ್ತಾ ಬಂದಂತೆ ಭಾರತದಲ್ಲಿ ಅನೇಕ ಶಿವಾಲಯಗಳು ನಿರ್ಮಾಣವಾಗಿ ಸುಸಂಸ್ಕೃತ ಸಮಾಜ‌ ನಿರ್ಮಾಣವಾಯಿತು. ಈ ಸತ್ಯವನ್ನು ಅರಿತ ಬಸವಣ್ಣನವರು ಇಷ್ಟಲಿಂಗವನ್ನು ಬಹು ಜನರಿಗೆ ಪರಿಚಯಿಸುವ ಮೂಲಕ ಜನರನ್ನು ಮುಕ್ತಿಗೆ ಹತ್ತಿರ ಮಾಡಲು ಪ್ರಯತ್ನಿಸಿದರು. ಅದರ ಫಲವಾಗಿ ಶ್ರೇಷ್ಠ ವಚನ ಸಾಹಿತ್ಯ ಅನೇಕ ಶರಣರಿಂದ ಜನ್ಮ ತಾಳುವಂತಾಯಿತು. ಇದೇ ಸಮಯದಲ್ಲಿಯೇ ಅನೇಕ ಶರಣರು ಹಾಗೂ ಸಂತರ ಉಗಮವಾಗಿ ಆಧ್ಯಾತ್ಮಿಕ ಸಾಹಿತ್ಯ ಹೊರ ಬಂದಿರುವುದನ್ನು ಕಾಣುತ್ತೇವೆ. ಅತ್ಯಂತ ಶ್ರೇಷ್ಠ ಸಾಹಿತ್ಯವಾದ ಸಿದ್ಧಾಂತ ಶಿಖಾಮಣಿ ರಚನೆಯಾಗಿರುವುದಕ್ಕೆ ಮೂಲ ಕಾರಣ ಅಂದಿನ ಸುವ್ಯವಸ್ಥಿತವಾದ ನಂದಿ ಕೃಷಿ ಸಂಸ್ಕೃತಿಯಾಗಿದೆ. 

ಕಳೆದ 9 ಶತಮಾನಗಳಲ್ಲಿ ಭಾರತದ ಮೇಲೆ ನಂದಿ ಕೃಷಿ ಸಂಸ್ಕೃತಿಯನ್ನು ಅರಿಯದ ವಿದೇಶಿಗರು ದಾಳಿ ಮಾಡುತ್ತಾ ಬಂದಾಗ ಸ್ಥಳೀಯ ‌ಜನರಿಗೆ ದಾರಿ ತೋರಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ಬಂದ ಶ್ರೇಯಸ್ಸು ಗುರು ವಿರಕ್ತ ಮಠಗಳ ಪೂಜ್ಯರಿಗೆ ಸಲ್ಲುತ್ತದೆ. "ಅನಾದಿ ಕಾಲದಿಂದ ಗುರು ಶಿಷ್ಯ ಪರಂಪರೆಯ ಮೂಲ ಕೊಂಡಿಯಾಗಿ ಕೆಲಸ ಮಾಡುತ್ತಾ ಬರುತ್ತಿರುವ ನಂದಿ ಕೃಷಿಯ ಮೇಲೆ ಸೃಷ್ಟಿಯ ಸಮತೋಲನೆ ನಿಂತಿದೆ" ಎಂಬ ಸತ್ಯದ ಅರಿವನ್ನು ವಿವಿಧ ಆಚರಣೆಗಳು ಹಾಗೂ ಜ್ಞಾನ ದಾಸೋಹದ ಮೂಲಕ ಧರ್ಮವನ್ನು ಉಳಿಸಿ ಬೆಳೆಸುತ್ತಾ ಪಂಚ ಪೀಠಾಧೀಶರು ಹಿಂದಿನಿಂದ ಬಂದಿದ್ದಾರೆ. ಭಾರತ ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳು ನಂದಿ ಕೃಷಿ ಸಂಸ್ಕೃತಿಯಿಂದ ಬೆಳೆದ ನಾಗರಿಕ ಸಮಾಜದಿಂದ ಜನ್ಮ ತಾಳಿವೆ.‌ ನಂದಿ ಕೃಷಿ ಸಂಸ್ಕೃತಿಯಿಂದ ಮಾತ್ರ ನಾಗರಿಕತೆ ಎಂಬ ಜ್ಯೋತಿ ಆರದಂತೆ ಉಳಿಯುವುದು ಎಂಬ ಸ್ಪಷ್ಟವಾದ ಸಂದೇಶ ನೀಡುವ ಶಕ್ತಿ ಕೇಂದ್ರಗಳು ಜ್ಯೋತಿರ್ಲಿಂಗಗಳಾಗಿವೆ. ದೇವರ ಜಾತ್ರೆಗಳಲ್ಲಿ ಬಳಸುವ ನಂದಿ ಧ್ವಜದಲ್ಲಿರುವ ಸೂರ್ಯ ಚಂದ್ರರ ಚಿತ್ರವು ಮಾನವ ಹಾಗೂ ನಂದಿ ನಡುವಿನ ಸಂಬಂಧ ಸೂರ್ಯ ಚಂದ್ರ ಇರುವವರೆಗೆ ಇರುತ್ತದೆ ಎಂಬುದರ ಸಂಕೇತವಾಗಿವೆ. ಜನರು ವಿಭಿನ್ನ ರೀತಿಯಲ್ಲಿ ಕಂಡರೂ ಕೂಡ ಅವರಲ್ಲಿ ಹರಿಯುವ ರಕ್ತ ಒಂದೇ ಆಗಿರುವಂತೆ ಸಮಾಜದಲ್ಲಿರುವ ವಿವಿಧ ಕಾಯಕಗಳ ತಾಯಿ ಬೇರು ನಂದಿ ಕೃಷಿಯಾಗಿದೆ ಎಂಬ ಸತ್ಯದ ಅರಿವು ಮೂಡಿಸುವ ಆಚರಣೆಗಳನ್ನು ಉಳಿಸಿ‌‌ ಬೆಳೆಸಿಕೊಂಡು ಬರುವುದರ ಜೊತೆಗೆ ವಿದೇಶಿಗರ ಆಕ್ರಮಣದ ಸಂದರ್ಭದಲ್ಲಿ ನಿಜವಾದ ಕೃಷಿ ವಿಶ್ವವಿದ್ಯಾಲಯಗಳಾಗಿ ನೆಲೆ  ನಿಂತು ಧರ್ಮವನ್ನು ಉಳಿಸುವ ಕಾರ್ಯವನ್ನು ವಿರಕ್ತ ಮಠಗಳು ಮಾಡಿವೆ‌.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಮಣ್ಣಿನ  ಸಾವಯವ ಇಂಗಾಲ ಸರಾಸರಿ 0.75% ರಷ್ಟು ಇತ್ತು, ಆದರೆ ಇಂದು 0.33% ಕ್ಕೆ ಇಳಿಕೆಯಾಗಿ ಸೃಷ್ಟಿಯ ಸಮತೋಲನೆ ತಪ್ಪುತ್ತಿದೆ. ಇದಕ್ಕೆ ಮೂಲ ಕಾರಣ ತೈಲ ತತ್ವ ಆಧಾರಿತ ಯಂತ್ರಗಳಿಗೆ ಆದ್ಯತೆ ನೀಡಿ ನಂದಿ ಕೃಷಿ ಸಂಸ್ಕೃತಿಯನ್ನು ನಿರ್ಲಕ್ಷಿಸಿರುವುದಾಗಿದೆ. ಪ್ರತಿ ಗ್ರಾಮಗಳಲ್ಲಿ ನಂದಿ ಕೃಷಿಕರ ಸಂಖ್ಯೆ ಕಡಿಮೆಯಾದಂತೆ ದೈಹಿಕ ಹಾಗೂ ಮಾನಸಿಕ ರೋಗಕ್ಕೆ ತುತ್ತಾಗುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಔಷಧಿಗಳಿಲ್ಲದ‌ ಮನೆಗಳನ್ನು ನೋಡುವುದು ಕಷ್ಟವಾಗುತ್ತಿದೆ. ಇನ್ನು ಮುಂದೆ ಜಾಗತಿಕ ಯುದ್ಧಗಳಿಂದ ತೈಲ ಕೊರತೆಯಾದಂತೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಾ ಸಾಗುವುದು. ಯಾರು ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರಲು ಮಠ ಮಂದಿರಗಳಲ್ಲಿರುವ ನಂದಿ ಸಾಕ್ಷಿಯಾಗಿ ಪ್ರಯತ್ನಿಸುವರೋ ಅವರಿಗೆ ಮಾತ್ರ ಒಳ್ಳೆಯ ಭವಿಷ್ಯವಿದೆ. ರಾಜರ ಕಾಲದಲ್ಲಿ ರಾಜರಿಗೆ ಅರಿವು ಮೂಡಿಸಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ಹಿಂದಿನ ಪೂಜ್ಯರು ಮಾಡಿದ್ದಾರೆ. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂದಿ‌ ಮತ ಜಾಗೃತಿಯ ಮೂಲಕ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಗೊಳಿಸುವ ಸಾಮರ್ಥ್ಯ ಇರುವ ಜನಪ್ರತಿನಿಧಿಗಳು ಚುನಾವಣೆಗಳಲ್ಲಿ ಆಯ್ಕೆಯಾಗುವಂತೆ ಮಾಡಬೇಕಾಗಿದೆ.

ನಂದಿ ಸಂಪತ್ತು ನಾಶವಾದಂತೆ ವಿಶ್ವ ಮಟ್ಟದಲ್ಲಿ ಮಣ್ಣು ಹಾಗೂ ಮಾನವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ವಿಶ್ವಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಬಸವ ನಾಡಿನ ಪೂಜ್ಯರಿಗೆ ಮಾತ್ರವಿದೆ ಎಂಬುದು ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದ ಅವರು ಜನ್ಮ ತಾಳಿದ ಬಿಜ್ಜರಗಿ ಗ್ರಾಮದ ಮನೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ‌ ಕಳೆದ 3 ವರ್ಷಗಳಲ್ಲಿ ಸಾಗಿ ಬಂದ ಹಾದಿಯಿಂದ ತಿಳಿಯುತ್ತದೆ. 

ಬಸವ ನಾಡಿನ ಅನೇಕ ಪೂಜ್ಯರು ತನು ಮನ ಧನದಿಂದ ನಂದಿ ಕೂಗು ಅಭಿಯಾನಕ್ಕೆ ಬೆಂಬಲವಾಗಿ ನಿಂತು ಆಶಿರ್ವಾದ ಮಾಡುತ್ತಾ ಬಂದಿರುವ ಕಾರಣ ರಾಜ್ಯದ ಕೋಟ್ಯಾಂತರ ಜನರಿಗೆ ನಂದಿ ಕೃಷಿಕರ ಮಹತ್ವದ ಕುರಿತು ಅರಿವು ಮೂಡಿಸಲು ಸಾಧ್ಯವಾಗಿದೆ. ಜಗತ್ತಿನಾದ್ಯಂತ ತೈಲ ಕೊರತೆಯಾದಂತೆ ನಂದಿ ಕೃಷಿ ಪುನಶ್ಚೇತನದ ಅವಶ್ಯಕತೆಯ ಅರಿವು ರಾಷ್ಟ್ರದ ಬಹು ಜನರಿಗೆ ಆಗುತ್ತಿದೆ. ಈ ಸಂದರ್ಭದಲ್ಲಿ ಬಸವ ನಾಡಿನ ಪೂಜ್ಯರು ಒಂದುಗೂಡಿ ರಾಜ್ಯದ 10 ಪ್ರತಿಶತ ಬಜೆಟ್ ನ್ನು ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ಮೀಸಲಿಡುವ ಕಾನೂನನ್ನು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಜಾರಿಗೆ ತಂದು ಇತರ ರಾಜ್ಯಗಳ ಪೂಜ್ಯರು ಹಾಗೂ ವಿಶ್ವದ ಎಲ್ಲ ಧಾರ್ಮಿಕ ಗುರುಗಳಿಗೆ ಮಾದರಿಯಾಗಿ ನಿಲ್ಲುವ ಅನಿವಾರ್ಯತೆ ಬಂದೊದಗಿದೆ. ಕನಿಷ್ಠ 50 ಸಾವಿರ ಕೋಟಿ ರೂಪಾಯಿಗಳನ್ನು ಮುಂದಿನ ರಾಜ್ಯ ಬಜೆಟ್ ನಲ್ಲಿ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ನೀಡುವ ಯೋಜನೆ ಹಾಗೂ ಎತ್ತುಗಳಿಂದ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಆರೋಗ್ಯವರ್ಧಕಗಳನ್ನು ಉತ್ಪಾದಿಸುವ ನಂದಿ ಶಕ್ತಿ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೆ ತರಲು ಪೂಜ್ಯರೆಲ್ಲರು ಒಗ್ಗೂಡಿ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇದರ ಜೊತೆಗೆ ನಂದಿ‌ ಮತ ಜಾಗೃತಿ ಮಾಡುವ ನಿರ್ಧಾರವನ್ನು ಪೂಜ್ಯರೆಲ್ಲರು ಕೈಗೆತ್ತಿಕೊಂಡರೆ ರಾಜ್ಯದ ಎತ್ತುಗಳು ಹಾಗೂ ಆಕಳುಗಳು ಕಾಸಾಯಿಖಾನೆಯ ಪಾಲಾಗುವುದು ಕಡಿಮೆಯಾಗಿ ರೈತರ ಮನೆಗಳಲ್ಲಿ ಉಳಿಯಲು ಪ್ರಾರಂಭಿಸುವವು.

ನಂದಿ ಮತ ಜಾಗೃತಿಯಿಂದ ನಂದಿ ಮತ ಕ್ರೋಢೀಕರಣ ಸಾಧ್ಯತೆ: 

ಬಸವ ನಾಡಿನಲ್ಲಿ ಎತ್ತಿನ ಕೃಷಿಕರು ಕಡಿಮೆಯಾದರೂ ಸಹ, ಎತ್ತುಗಳ ಆಧಾರಿತ ಪೂಜಾ ಸಂಪ್ರದಾಯವನ್ನು ಬಹು ಜನರು ಉಳಿಸಿ ಬೆಳೆಸಿಕೊಂಡು ಬಂದು ನಂದಿಯನ್ನು ತಮ್ಮ ಆರಾಧ್ಯ ದೈವವಾಗಿಸಿಕೊಂಡಿದ್ದಾರೆ. ಅದಕ್ಕಾಗಿ, ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ಬದ್ಧತೆಯನ್ನು ತೋರುವ ರಾಜಕೀಯ ನಾಯಕರಿಗೆ ಪಕ್ಷಾತೀತವಾಗಿ ಮತ ನೀಡುವ ಸಂಕಲ್ಪವನ್ನು ಮಾಡಿದವರಿಗೆ ಹಾಗೂ ವಿಶ್ವದ ಬಹು ಜನರಿಗೆ ಹೇಗೆ ಒಳಿತಾಗುವುದು ಎಂಬುವುದನ್ನು ಭಕ್ತರಿಗೆ ವೈಜ್ಞಾನಿಕವಾಗಿ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಕೃಷಿ ವಿಜ್ಞಾನಿಗಳನ್ನು ಮಠ ಮಂದಿರಗಳ ಕಾರ್ಯಕ್ರಮಗಳಿಗೆ ಆಹ್ವಾನಿಸಿ ನಂದಿಗಾಗಿ ಪಕ್ಷಾತೀತವಾಗಿ ಮತ ಮೀಸಲಿಡುವುದರಿಂದ ಸರ್ವರಿಗೆ ಒಳಿತಾಗುವುದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಬಸವ ನಾಡಿನ ಪೂಜ್ಯರೆಲ್ಲರೂ ಒಂದುಗೂಡಿ ತೆಗೆದುಕೊಂಡರೆ ರಾಷ್ಟ್ರ ಮಟ್ಟದ ನಂದಿ ಕ್ರಾಂತಿಗೆ ಮುನ್ನುಡಿ ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ನಂದಿ ಮತ ಜಾಗೃತಿಯ ಕೆಲವು ಘೋಷ ವಾಕ್ಯಗಳು.

1. ವಿಭೂತಿ ಹಚ್ಚುವ ಕೈ ನಂದಿಗಾಗಿ ಮತ ನೀಡುವಂತಾಗಲಿ.

2. ಶಿವಾಲಯದ ಶಿವಲಿಂಗದ ಮುಂದಿರುವ ನಂದಿಗೆ ನಮಸ್ಕರಿಸುವ ಕೈ ನಂದಿಗಾಗಿ ಮತ ನೀಡುವಂತಾಗಲಿ.

3. ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿ ಇಟ್ಟು ಪೂಜಿಸುವ ಕುಟುಂಬಗಳು ನಂದಿಗಾಗಿ ಮತ ಮೀಸಲಿಡುವಂತಾಗಲಿ.

4. ತಿನ್ನುವ ಅನ್ನ ಸತ್ವಭರಿತವಾಗಿ ಇರಬೇಕಾದರೆ ನಂದಿಗಾಗಿ ಮತ ಮೀಸಲಿಡಿ.

5. ನಂದಿಯೊಂದಿಗೆ ಕೆಲಸ ಮಾಡುವ ರೈತನ ಬೆವರಿನ ಮೇಲೆ ನಮ್ಮ ಮಕ್ಕಳ ಭವಿಷ್ಯ ನಿಂತಿದೆ ಎಂಬುದನ್ನು ಅರಿತವರು ನಂದಿಗಾಗಿ ಮತ ಮೀಸಲಿಡಿ.

ರಾಜ್ಯದ 50 ಸಾವಿರ ಕೋಟಿ ರೂಪಾಯಿ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ಕೃಷಿ ಹಾಗೂ ನಂದಿ ಶಕ್ತಿ ಕೆಂದ್ರಗಳಿಗೆ ಪ್ರೋತ್ಸಾಹ ನೀಡುವುದರಿಂದ ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗಳು:

1. ಮಠ ಮಂದಿರಗಳು ಹಾಗೂ ರೈತರ ನಡುವೆ ಪುನಃ ಬಾಂಧವ್ಯ ವೃದ್ಧಿಯಾಗುವುದರ ಜೊತೆಗೆ ಬಸವ ನಾಡಿನ ಮಠ ಮಂದಿರಗಳು ವಿಶ್ವಕ್ಕೆ ಕೃಷಿ ವಿಶ್ವವಿದ್ಯಾಲಯಗಳಾಗಿ ಮಾರ್ಗದರ್ಶನ ನೀಡಲು ಪ್ರಾರಂಭಿಸುವವು. 

2. ನಂದಿ ಶಕ್ತಿ ಆಧಾರಿತ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುವುದರ ಜೊತೆಗೆ ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಾಗಿ ಬಹು ಜನರಿಗೆ ಉದ್ಯೋಗ ಅವಕಾಶ ದೊರೆತು ಗ್ರಾಮಗಳು ಮರಳಿ ಸ್ವಾವಲಂಬಿಯಾಗುವವು.

3. ಮಣ್ಣು ಪುನಶ್ಚೇತನಾಗುವುದರ ಜೊತೆಗೆ ಹಳ್ಳ ಕೊಳ್ಳಗಳಲ್ಲಿ ಪುನಃ ಶುದ್ಧವಾದ ನೀರು ಹರಿಯಲು ಪ್ರಾರಂಭಿಸುವುದು. ಇದರಿಂದ ಮಲಿನವಾಗಿರುವ ಇಂದಿನ ನದಿಗಳು ಪುನಃ ಶುದ್ಧವಾಗುವವು.

4. ಗ್ರಾಮೀಣ ಹಾಗೂ ನಗರ ಜನರ ಆರೋಗ್ಯ ವೃದ್ಧಿಸುವುದರ ಜೊತೆಗೆ ಆಧ್ಯಾತ್ಮಿಕ ಪ್ರಪಂಚಕ್ಕೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗುವುದು.

5. ಶಿವಲಿಂಗ ಪೂಜೆ, ಇಷ್ಟಲಿಂಗ ಪೂಜೆ ಹಾಗೂ ಹಠ ಯೋಗದ ಮೂಲಕ ಸೃಷ್ಟಿಯ ಜೀವ ಚಕ್ರವನ್ನು ಅರಿತು ಮುಕ್ತಿಗೆ ಹತ್ತಿರವಾಗುವ ಜನರ ಸಂಖ್ಯೆ ಹೆಚ್ಚಾಗುವುದು.

ಕಾಯವೇ ಕೈಲಾಸ ಹಾಗೂ ಕಾಯಕವೇ ಕೈಲಾಸ ಎಂಬ ತತ್ವಗಳು ನಂದಿ ಶಕ್ತಿಯ ಸದ್ಭಳಕೆಯ ಮೇಲೆ‌ ನಿಂತಿದೆ. ಈ ಸತ್ಯವನ್ನು ವೈಜ್ಞಾನಿಕವಾಗಿ ಅರಿತು ಹೆಜ್ಜೆ ಇಡುವುದೇ ಸರ್ವ ಧರ್ಮದ ಜನರಿಗೆ ಒಳಿತು ಮಾಡುವ ಕಾರ್ಯವಾಗಿದೆ.‌ ಸರ್ವೆ ಜನ‌ ಸುಖಿನೊ ಭವಂತು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

missionsavesoil.com

....................................

ಬಸವರಾಜ ಎನ್. ಬಿರಾದಾರ

ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ

Thursday, July 16, 2026

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು" ಜಾರಿಗೆ ತರಲು ಸರ್ಕಾರಕ್ಕೆ ಹಕ್ಕೊತ್ತಾಯ ಏಕೆ ಮಾಡಬೇಕಾಗಿದೆ?

 



ಎತ್ತಿನ ಕೃಷಿ ಸಂಸ್ಕೃತಿಯು ಮಣ್ಣು ಹಾಗೂ ಮಾನವರ ಆರೋಗ್ಯವನ್ನು ವೃದ್ಧಿಸುತ್ತಾ ಸಾಗಿದರೆ, ತೈಲ ಆಧಾರಿತ ಯಂತ್ರ ಹಾಗೂ ರಾಸಾಯನಿಕ ಕೃಷಿಯು ಮಣ್ಣು ಹಾಗೂ ಜನರ ಆರೋಗ್ಯವನ್ನು ನಾಶ ಮಾಡುತ್ತಾ ಸಾಗುವುದು ಎಂಬುದು ವಿಶ್ವದ ಬಹುಜನರಿಗೆ ಅರಿವಾಗುತ್ತಿದೆ. ಎತ್ತಿನ ಕೃಷಿ ಸಂಸ್ಕೃತಿ‌ ನಾಶವಾದಂತೆ ವಿಶ್ವದ ಅರ್ಧಕ್ಕಿಂತ ಹೆಚ್ಚು ಮಣ್ಣು ಮರಳುಗಾಡಾಗಿ ಪರಿವರ್ತನೆಯಾಗುತ್ತಿದೆ ಹಾಗೂ ಬಹು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂಬುದು ವಿಶ್ವ ಸಂಸ್ಥೆಯ ಅಂಕಿ ಅಂಶಗಳಿಂದ ತಿಳಿಯುತ್ತಿದೆ. 

ಮಣ್ಣು, ಮಾನವ, ನಂದಿ, ಶಿವಲಿಂಗ ಹಾಗೂ ಇಷ್ಟಲಿಂಗದ ಮಧ್ಯೆ ಇರುವ ವೈಜ್ಞಾನಿಕ ಸಂಬಂಧವನ್ನು ಅರಿತು‌ ನಡೆಯುವುದೇ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಬಸವತತ್ವದ ಮೂಲ ಉದ್ದೇಶವಾಗಿದೆ. ಗುರು ಶಿಷ್ಯ ಪರಂಪರೆಯ ಮೂಲ‌ ಕೊಂಡಿ ನಂದಿ ಕೃಷಿ ಸಂಸ್ಕೃತಿ ಆಗಿರುವ ಕಾರಣ ಮಠ ಮಂದಿರಗಳಲ್ಲಿ ಎತ್ತಿನ ಕೃಷಿಕರ ಭಾವೈಕ್ಯದ ಸಂಕೇತವಾದ ನಂದಿ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸುವ ಸಂಪ್ರದಾಯವಿದೆ. ಜಗತ್ತಿನಲ್ಲಿ ವಿವಿಧ ಆಚರಣೆಗಳ ಮೂಲಕ ಮಣ್ಣು ಹಾಗೂ ಎತ್ತುಗಳನ್ನು ಪೂಜಿಸುವ ಅತೀ ಹೆಚ್ಚು ಜನರನ್ನು ಹೊಂದಿದ ಭೂ ಪ್ರದೇಶ ಬಸವ ನಾಡಾಗಿರುವುದಕ್ಕೆ ಮೂಲ ಕಾರಣ ವಿಶ್ವಗುರು ಬಸವಣ್ಣನವರು ದೂರದೃಷ್ಟಿಕೋನದಿಂದ ನೀಡಿದ ಇಷ್ಟಲಿಂಗವಾಗಿದೆ ಎಂಬುದು 9 ಶತಮಾನಗಳ ಪರಕೀಯರ ದಾಳಿಯ ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ವಿಶ್ವದಲ್ಲಿ ಅತ್ಯಂತ ವಿಶೇಷವಾದ ಎತ್ತಿನ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಭೂ ಪ್ರದೇಶ ಬಸವ ನಾಡಾಗಿರುವುದಕ್ಕೆ ಮೂಲ ಕಾರಣ ಹಿಂದಿನ ಹಾಗೂ ಇಂದಿನ ಅನೇಕ ಮಠ ಮಂದಿರಗಳ ಪೂಜ್ಯರಾಗಿದ್ದಾರೆ. ವಿಶ್ವ ಮಟ್ಟದಲ್ಲಿ ಮಣ್ಣು ಹಾಗೂ ಮಾನವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ವಿಶ್ವಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಬಸವ ನಾಡಿನ ಪೂಜ್ಯರಿಗೆ ಮಾತ್ರವಿದೆ ಎಂಬುದು ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದ ಅವರು ಜನ್ಮ ತಾಳಿದ ಬಿಜ್ಜರಗಿ ಗ್ರಾಮದ ಮನೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ‌ ಕಳೆದ 3 ವರ್ಷಗಳಲ್ಲಿ ಸಾಗಿ ಬಂದ ಹಾದಿಯಿಂದ ತಿಳಿಯುತ್ತದೆ. 

ಬಸವ ನಾಡಿನ ಅನೇಕ ಪೂಜ್ಯರು ತನು ಮನ ಧನದಿಂದ ನಂದಿ ಕೂಗು ಅಭಿಯಾನಕ್ಕೆ ಬೆಂಬಲವಾಗಿ ನಿಂತು ಆಶಿರ್ವಾದ ಮಾಡುತ್ತಾ ಬಂದಿರುವ ಕಾರಣ ರಾಜ್ಯದ ಕೋಟ್ಯಾಂತರ ಜನರಿಗೆ ನಂದಿ ಕೃಷಿಕರ ಮಹತ್ವದ ಕುರಿತು ಅರಿವು ಮೂಡಿಸಲು ಸಾಧ್ಯವಾಗಿದೆ. ಜಗತ್ತಿನಾದ್ಯಂತ ತೈಲ ಕೊರತೆಯಾದಂತೆ ನಂದಿ ಕೃಷಿ ಪುನಶ್ಚೇತನದ ಅವಶ್ಯಕತೆಯ ಅರಿವು ರಾಷ್ಟ್ರದ ಬಹು ಜನರಿಗೆ ಆಗುತ್ತಿದೆ. ಈ ಸಂದರ್ಭದಲ್ಲಿ ಬಸವ ನಾಡಿನ ಪೂಜ್ಯರು ಒಂದುಗೂಡಿ ರಾಜ್ಯದ 10 ಪ್ರತಿಶತ ಬಜೆಟ್ ನ್ನು ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ಮೀಸಲಿಡುವ ಕಾನೂನನ್ನು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಜಾರಿಗೆ ತಂದು ಇತರ ರಾಜ್ಯಗಳ ಪೂಜ್ಯರು ಹಾಗೂ ವಿಶ್ವದ ಎಲ್ಲ ಧಾರ್ಮಿಕ ಗುರುಗಳಿಗೆ ಮಾದರಿಯಾಗಿ ನಿಲ್ಲುವ ಅನಿವಾರ್ಯತೆ ಬಂದೊದಗಿದೆ. ಕನಿಷ್ಠ 50 ಸಾವಿರ ಕೋಟಿ ರೂಪಾಯಿಗಳನ್ನು ಮುಂದಿನ ರಾಜ್ಯ ಬಜೆಟ್ ನಲ್ಲಿ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ನೀಡುವ ಯೋಜನೆ ಹಾಗೂ ಎತ್ತುಗಳಿಂದ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಆರೋಗ್ಯವರ್ಧಕಗಳನ್ನು ಉತ್ಪಾದಿಸುವ ನಂದಿ ಶಕ್ತಿ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೆ ತರಲು ಪೂಜ್ಯರೆಲ್ಲರು ಒಗ್ಗೂಡಿ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇದರ ಜೊತೆಗೆ ನಂದಿ‌ ಮತ ಜಾಗೃತಿ ಮಾಡುವ ನಿರ್ಧಾರವನ್ನು ಪೂಜ್ಯರೆಲ್ಲರು ಕೈಗೆತ್ತಿಕೊಂಡರೆ ರಾಜ್ಯದ ಎತ್ತುಗಳು ಹಾಗೂ ಆಕಳುಗಳು ಕಾಸಾಯಿಖಾನೆಯ ಪಾಲಾಗುವುದು ಕಡಿಮೆಯಾಗಿ ರೈತರ ಮನೆಗಳಲ್ಲಿ ಉಳಿಯಲು ಪ್ರಾರಂಭಿಸುವವು.

ನಂದಿ ಮತ ಜಾಗೃತಿಯಿಂದ ನಂದಿ ಮತ ಕ್ರೋಢೀಕರಣ ಸಾಧ್ಯತೆ: 

ಬಸವ ನಾಡಿನಲ್ಲಿ ಎತ್ತಿನ ಕೃಷಿಕರು ಕಡಿಮೆಯಾದರೂ ಸಹ, ಎತ್ತುಗಳ ಆಧಾರಿತ ಪೂಜಾ ಸಂಪ್ರದಾಯವನ್ನು ಬಹು ಜನರು ಉಳಿಸಿ ಬೆಳೆಸಿಕೊಂಡು ಬಂದು ನಂದಿಯನ್ನು ತಮ್ಮ ಆರಾಧ್ಯ ದೈವವಾಗಿಸಿಕೊಂಡಿದ್ದಾರೆ. ಅದಕ್ಕಾಗಿ, ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ಬದ್ಧತೆಯನ್ನು ತೋರುವ ರಾಜಕೀಯ ನಾಯಕರಿಗೆ ಪಕ್ಷಾತೀತವಾಗಿ ಮತ ನೀಡುವ ಸಂಕಲ್ಪವನ್ನು ಮಾಡಿದವರಿಗೆ ಹಾಗೂ ವಿಶ್ವದ ಬಹು ಜನರಿಗೆ ಹೇಗೆ ಒಳಿತಾಗುವುದು ಎಂಬುವುದನ್ನು ಭಕ್ತರಿಗೆ ವೈಜ್ಞಾನಿಕವಾಗಿ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಕೃಷಿ ವಿಜ್ಞಾನಿಗಳನ್ನು ಮಠ ಮಂದಿರಗಳ ಕಾರ್ಯಕ್ರಮಗಳಿಗೆ ಆಹ್ವಾನಿಸಿ ನಂದಿಗಾಗಿ ಪಕ್ಷಾತೀತವಾಗಿ ಮತ ಮೀಸಲಿಡುವುದರಿಂದ ಸರ್ವರಿಗೆ ಒಳಿತಾಗುವುದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಬಸವ ನಾಡಿನ ಪೂಜ್ಯರೆಲ್ಲರೂ ಒಂದುಗೂಡಿ ತೆಗೆದುಕೊಂಡರೆ ರಾಷ್ಟ್ರ ಮಟ್ಟದ ನಂದಿ ಕ್ರಾಂತಿಗೆ ಮುನ್ನುಡಿ ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. 

ನಂದಿ ಮತ ಜಾಗೃತಿಯ ಕೆಲವು ಘೋಷ ವಾಕ್ಯಗಳು.

1. ವಿಭೂತಿ ಹಚ್ಚುವ ಕೈ ನಂದಿಗಾಗಿ ಮತ ನೀಡುವಂತಾಗಲಿ.

2. ಶಿವಾಲಯದ ಶಿವಲಿಂಗದ ಮುಂದಿರುವ ನಂದಿಗೆ ನಮಸ್ಕರಿಸುವ ಕೈ ನಂದಿಗಾಗಿ ಮತ ನೀಡುವಂತಾಗಲಿ.

3. ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿ ಇಟ್ಟು ಪೂಜಿಸುವ ಕುಟುಂಬಗಳು ನಂದಿಗಾಗಿ ಮತ ಮೀಸಲಿಡುವಂತಾಗಲಿ.

4. ತಿನ್ನುವ ಅನ್ನ ಸತ್ವಭರಿತವಾಗಿ ಇರಬೇಕಾದರೆ ನಂದಿಗಾಗಿ ಮತ ಮೀಸಲಿಡಿ.

5. ನಂದಿಯೊಂದಿಗೆ ಕೆಲಸ ಮಾಡುವ ರೈತನ ಬೆವರಿನ ಮೇಲೆ ನಮ್ಮ ಮಕ್ಕಳ ಭವಿಷ್ಯ ನಿಂತಿದೆ ಎಂಬುದನ್ನು ಅರಿತವರು ನಂದಿಗಾಗಿ ಮತ ಮೀಸಲಿಡಿ.

 ರಾಜ್ಯದ 50 ಸಾವಿರ ಕೋಟಿ ರೂಪಾಯಿ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ಕೃಷಿ ಹಾಗೂ ನಂದಿ ಶಕ್ತಿ ಕೆಂದ್ರಗಳಿಗೆ ಪ್ರೋತ್ಸಾಹ ನೀಡುವುದರಿಂದ ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗಳು:

1. ಮಠ ಮಂದಿರಗಳು ಹಾಗೂ ರೈತರ ನಡುವೆ ಪುನಃ ಬಾಂಧವ್ಯ ವೃದ್ಧಿಯಾಗುವುದರ ಜೊತೆಗೆ ಬಸವ ನಾಡಿನ ಮಠ ಮಂದಿರಗಳು ವಿಶ್ವಕ್ಕೆ ಕೃಷಿ ವಿಶ್ವವಿದ್ಯಾಲಯಗಳಾಗಿ ಮಾರ್ಗದರ್ಶನ ನೀಡಲು ಪ್ರಾರಂಭಿಸುವವು. 

2. ನಂದಿ ಶಕ್ತಿ ಆಧಾರಿತ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುವುದರ ಜೊತೆಗೆ ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಾಗಿ ಬಹು ಜನರಿಗೆ ಉದ್ಯೋಗ ಅವಕಾಶ ದೊರೆತು ಗ್ರಾಮಗಳು ಮರಳಿ ಸ್ವಾವಲಂಬಿಯಾಗುವವು.

3. ಮಣ್ಣು ಪುನಶ್ಚೇತನಾಗುವುದರ ಜೊತೆಗೆ ಹಳ್ಳ ಕೊಳ್ಳಗಳಲ್ಲಿ ಪುನಃ ಶುದ್ಧವಾದ ನೀರು ಹರಿಯಲು ಪ್ರಾರಂಭಿಸುವುದು. ಇದರಿಂದ ಮಲಿನವಾಗಿರುವ ಇಂದಿನ ನದಿಗಳು ಪುನಃ ಶುದ್ಧವಾಗುವವು.

4. ಗ್ರಾಮೀಣ ಹಾಗೂ ನಗರ ಜನರ ಆರೋಗ್ಯ ವೃದ್ಧಿಸುವುದರ ಜೊತೆಗೆ ಆಧ್ಯಾತ್ಮಿಕ ಪ್ರಪಂಚಕ್ಕೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗುವುದು.

5. ಶಿವಲಿಂಗ ಪೂಜೆ, ಇಷ್ಟಲಿಂಗ ಪೂಜೆ ಹಾಗೂ ಹಠ ಯೋಗದ ಮೂಲಕ ಸೃಷ್ಟಿಯ ಜೀವ ಚಕ್ರವನ್ನು ಅರಿತು ಮುಕ್ತಿಗೆ ಹತ್ತಿರವಾಗುವ ಜನರ ಸಂಖ್ಯೆ ಹೆಚ್ಚಾಗುವುದು.

ಕಾಯವೇ ಕೈಲಾಸ ಹಾಗೂ ಕಾಯಕವೇ ಕೈಲಾಸ ಎಂಬ ತತ್ವಗಳು ನಂದಿ ಶಕ್ತಿಯ ಸದ್ಭಳಕೆಯ ಮೇಲೆ‌ ನಿಂತಿದೆ. ಈ ಸತ್ಯವನ್ನು ವೈಜ್ಞಾನಿಕವಾಗಿ ಅರಿತು ಹೆಜ್ಜೆ ಇಡುವುದೇ ಸರ್ವ ಧರ್ಮದ ಜನರಿಗೆ ಒಳಿತು ಮಾಡುವ ಕಾರ್ಯವಾಗಿದೆ.‌ ಸರ್ವೆ ಜನ‌ ಸುಖಿನೊ ಭವಂತು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com

....................................

ಬಸವರಾಜ ಎನ್. ಬಿರಾದಾರ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ


Thursday, July 2, 2026

ಮಠ ಮಂದಿರಗಳೆಂಬ ಕೃಷಿ ವಿಶ್ವವಿದ್ಯಾಲಯಗಳ ಮೇಲೆ ವಿಶ್ವದ ಭವಿಷ್ಯ ನಿಂತಿದೆಯೇ?


 ರೈತರಿಂದ ಪೂಜ್ಯರಿಗೆ ಮನವಿ: ನಂದಿ ಶಕ್ತಿಯ ಬಳಕೆಯಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವುದಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ರಾಜಕೀಯ ನಾಯಕರಿಗೆ ನಂಬಿದ ದೇವರ ಸಾಕ್ಷಿಯಾಗಿ ಮತ ನೀಡುವಂತೆ ಪೂಜ್ಯರು ಒಂದುಗೂಡಿ ಭಕ್ತರಿಗೆ ಅರಿವು ಮೂಡಿಸುವ ನಿರ್ಣಯ ತೆಗೆದುಕೊಳ್ಳಲು ರೈತರಿಂದ ಪೂಜ್ಯರಿಗೆ ಮನವಿ ಮಾಡಿಕೊಳ್ಳುವ ಕಾರ್ಯಕ್ರಮವನ್ನು ವಿಶ್ವಗುರು ಬಸವಣ್ಣನವರು ನ್ಯಾಯ ಪಂಚಾಯತಿ ನಡೆಸುತ್ತಿದ್ದ ಬಸವಕಲ್ಯಾಣದ ಪರುಷ ಕಟ್ಟೆಯಿಂದ ದಿನಾಂಕ: 26-06-2026 ರಂದು ಪ್ರಾರಂಭಿಸಲಾಗಿದೆ.



🙏ವಿಷಯ ವಿಶ್ಲೇಷಣೆ 🙏

ಉದ್ದೇಶ: ಆಧುನಿಕ ಕೃಷಿಯಿಂದ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಮಣ್ಣು ನಾಶವಾಗಿ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಿವೆ. ಇದರ ದುಷ್ಪರಿಣಾಮವು ಹಲವು ರೋಗಗಳು ಹಾಗೂ ಹವಾಮಾನ ವೈಪರೀತ್ಯಗಳ ಮೂಲಕ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿದೆ. ಹಿಂದೆ ಕೃಷಿ ವಿಶ್ವವಿದ್ಯಾಲಯಗಳು ಇಲ್ಲದಿದ್ದರೂ ಕೂಡ ಮಣ್ಣಿನ ಫಲವತ್ತತೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಶ್ರೇಷ್ಠ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿರುವುದಕ್ಕೆ ಮುಖ್ಯ ಕಾರಣ ನಂದಿ ಕೃಷಿ ಕಾಯಕಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತಾ ಬಂದಿರುವ ಹಿಂದಿನ ಮಠ-ಮಂದಿರಗಳ ಪೂಜ್ಯರಾಗಿದ್ದಾರೆ ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಹಿಂದೆ ಮಠ ಮಂದಿರಗಳು ನಿಜವಾದ ಕೃಷಿ ವಿಶ್ವವಿದ್ಯಾಲಯಗಳಾಗಿ ಕೆಲಸ ಮಾಡಿವೆ ಎಂಬುದಕ್ಕೆ ಮಠ-ಮಂದಿರಗಳಲ್ಲಿರುವ ನಂದಿ ಮೂರ್ತಿಗಳು ಸಾಕ್ಷಿಯಾಗಿವೆ. ಮಠ-ಮಂದಿರಗಳಲ್ಲಿರುವ ನಂದಿ ಮೂರ್ತಿಗಳು ರಾಷ್ಟ್ರದ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿವೆ. ನಂದಿ ಕೃಷಿಕರಿಂದ ಜಂಗಮ, ಬಡಿಗೇರ, ಕಂಬಾರ, ಕುಂಬಾರ, ಮಡಿವಾಳ, ಚಮ್ಮಾರ, ಹೀಗೆ ಅನೇಕರಿಗೆ ಕಾಯಕದ ಭದ್ರತೆ ದೊರೆಯುತ್ತಾ ಬಂದಿದೆ. ಇಂದು ಕೇವಲ ಒಂದು ವರ್ಷ ತೈಲ ಪೂರೈಕೆ ನಿಂತರೆ ಟ್ರಾಕ್ಟರ್ ಅವಲಂಬಿತ ಕೃಷಿ ಸ್ಥಗಿತವಾಗಿ ಬಹು ಜನರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗುವುದು. ಜಾಗತಿಕ ಯುಧ್ದಗಳಿಂದ ತೈಲ ಕೊರತೆಯಾದಂತೆ ಕೃಷಿ ಅವಲಂಬಿತ ಕಾಯಕಗಳು ನಾಶವಾಗುವವು. ಹಾಗಾಗಿ, ಸೂರ್ಯ ಚಂದ್ರ ಇರುವವರೆಗೆ ರೈತರಿಗೆ ಹಾಗೂ ಸರ್ವರಿಗೆ ಕಾಯಕದ ಭದ್ರತೆ ನೀಡುವುದು ನಂದಿ ಶಕ್ತಿಯಾಗಿದೆ. ಇದೇ ಕಾರಣಕ್ಕೆ ಮಠ ಮಂದಿರಗಳ ಜಾತ್ರೆಗಳ ಸಂದರ್ಭದಲ್ಲಿ ಬಳಸುವ ನಂದಿ ಧ್ವಜದಲ್ಲಿ ನಂದಿ ಚಿತ್ರದ ಜೊತೆಗೆ ಸೂರ್ಯ ಚಂದ್ರರ ಚಿತ್ರ ಇರುವುದನ್ನು ಕಾಣುತ್ತೇವೆ. ವರ್ಷದಲ್ಲಿ ಬರುವ 12 ಅಮವಾಸ್ಯೆ-ಹುಣ್ಣಿಮೆಯ ಹಬ್ಬಗಳು ನಂದಿ ಕೃಷಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಆಚರಣೆಗಳಾಗಿವೆ. ಇದೇ ಕಾರಣಕ್ಕೆ ನಂದಿ ಕೃಷಿ ನಾಶವಾದಂತೆ ಸಂಸ್ಕೃತಿ ಎಂಬ ಶಬ್ದ ಅರ್ಥ ಕಳೆದುಕೊಳ್ಳುತ್ತಿದೆ‌.

ಆಧುನಿಕ ಜಗತ್ತಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚಾದಂತೆ ರೈತರು ಕೃಷಿಯಿಂದ ವಿಮುಖರಾಗಿ ಭವಿಷ್ಯ ಮಂಕಾಗುತ್ತಿರುವುದಕ್ಕೆ ಮೂಲ ಕಾರಣ ನಾಗರೀಕತೆ ಬೆಳವಣಿಗೆಗೆ ಮೂಲಾಧಾರವಾದ ನಂದಿ ಕೃಷಿಯನ್ನು ಮರೆತು ತೈಲ ಆಧಾರಿತ ರಾಸಾಯನಿಕ ಹಾಗೂ ಯಾಂತ್ರಿಕ ಕೃಷಿಗೆ ಮಹತ್ವ ನೀಡುತ್ತಿರುವುದಾಗಿದೆ. ಕಳೆದ 9 ಶತಮಾನಗಳಲ್ಲಿ ಅದೆಷ್ಟೋ ಪರಕೀಯರ ದಾಳಿಗಳಾದರೂ ಸಹ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಕೀರ್ತಿ ಮಠ-ಮಂದಿರಗಳ ಪೂಜ್ಯರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅನೇಕ ಪೂಜ್ಯರ ಸಮಾಧಿಯ ಜೊತೆಗೆ ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದನ್ನು ಕಾಣುತ್ತೇವೆ. ನಂದಿ ಕೃಷಿ ಸಂಸ್ಕೃತಿ ವಿನಾಶದ ಅಂಚಿನಲ್ಲಿರುವ ಸಂದರ್ಭದಲ್ಲಿ ನಾವಿಂದು ಮಠ ಮಂದಿರಗಳಲ್ಲಿರುವ ನಂದಿ ಆಧಾರಿತವಾಗಿ ಒಗ್ಗೂಡಿ ಇಂದಿನ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಬಂದೊದಗಿದೆ. ಮಠ ಮಂದಿರಗಳಲ್ಲಿರುವ ನಂದಿ ಮೂರ್ತಿಗಳಿಗೆ ಭಕ್ತಿಯಿಂದ ಕೈ ಮುಗಿದು ವಾಸ್ತವದಲ್ಲಿ ನಂದಿ ಸಂಪತ್ತನ್ನು ಉಳಿಸಲು ಬಯಸುವ ರಾಜಕೀಯ ನಾಯಕರಿಗೆ ಮತ ನೀಡದಿದ್ದರೆ ಮುಂದೆ ಯಾವ ದೇವರೂ ಕೂಡ ಕಾಪಾಡಲಾರ ಎಂಬ ಸತ್ಯ ಸಂಗತಿಯ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ನಂದಿ ಭಕ್ತರನ್ನು ಹೊಂದಿದ ದೇಶ ಭಾರತವಾಗಿದೆ. ನಂದಿ ಮತಗಳ‌ನ್ನು ಪೂಜ್ಯರ ಮೂಲಕ ಕ್ರೋಢೀಕರಿಸಿ ರೈತರಿಗೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದರೆ ಮಾತ್ರ ಭಾರತ ಹಾಗೂ ಇತರ ಎಲ್ಲ ರಾಷ್ಟ್ರಗಳ ರೈತರಿಗೆ ಒಳ್ಳೆಯ ಭವಿಷ್ಯವಿದೆ. ಹಿಂದು, ವೀರಶೈವ, ಲಿಂಗಾಯತ ಹಾಗೂ ವಕ್ಕಲಿಗ ಎಂಬ ಶಬ್ದಗಳು ನಂದಿ ಕೃಷಿಕರ‌ ಶ್ರಮದಿಂದ ಬೆಳೆದ ನಾಗರಿಕ ಸಮಾಜದಿಂದ ಜನ್ಮ ತಾಳಿವೆ. ಯಾವ ಶಕ್ತಿಯಿಂದ ವಿವಿಧ ಧಾರ್ಮಿಕ ಶಬ್ದಗಳು ಜನ್ಮ ತಾಳಿವೆಯೋ ಆ ಶಕ್ತಿಯನ್ನು ಉಳಿಸಲು ಪ್ರಯತ್ನಿಸದೆ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ನಾಯಕರ ಅಂತ್ಯ ಕಾಲ ತೈಲ ಕೊರತೆಯಾದಂತೆ ಹತ್ತಿರವಾಗುವುದು. ಹಾಗಾಗಿ, ದೂರದೃಷ್ಟಿಕೋನದಿಂದ ಚಿಂತನೆ ಮಾಡಿ ಹೆಜ್ಜೆ ಇಡುವ ನಾಯಕರಿಗೆ ಮಾತ್ರ ಇನ್ನು ಮುಂದೆ ಒಳ್ಳೆಯ ಭವಿಷ್ಯವಿದೆ.

ಗುರಿ: ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆ ಜಾರಿಗೆ ತಂದು ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಾಗುವಂತೆ ಮಾಡುವುದು.

ಗುರಿ ತಲುಪುವ ಪ್ರಕ್ರಿಯೆ:

ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಜರುಗಿದ 108 ಗ್ರಾಮಗಳ ಜೋಡೆತ್ತಿನ ಕೃಷಿಕರ ಸಮಾವೇಶದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಹಕ್ಕೊತ್ತಾಯ ಪತ್ರದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವಂತೆ ಮಾಡುವುದು: 

1. ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ರೈತರು ಎತ್ತುಗಳನ್ನು ಮಾರಾಟ‌ ಮಾಡದೆ ತಮ್ಮ ಮನೆಯಲ್ಲಿ ಉಳಿಸಿಕೊಳ್ಳುವಂತೆ ಮಾಡಬೇಕು.

2. ರಾಜ್ಯ ಸರ್ಕಾರಗಳು ರಾಜ್ಯದ 10 ಪ್ರತಿಶತ ಬಜೆಟ್ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆಹಾರ, ನಂದಿ ಗೊಬ್ಬರ ಹಾಗೂ ನಂದಿ ಆರೋಗ್ಯ ವರ್ಧಕಗಳ ಉತ್ಪಾದನೆಗೆ ಉತ್ತೇಜನ ನೀಡುವ ಕಾನೂನು ಜಾರಿಗೆ ತರಬೇಕು.

ಸಂಪರ್ಕಿಸಿ:missionsavesoil.com

..........................................

ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನದ ಅಡಿಯಲ್ಲಿ 2026ರ ಬಸವ ಜಯಂತಿ ಅಂಗವಾಗಿ ಬಸವಕಲ್ಯಾಣದ ಸುತ್ತಲಿನ 11 ಗ್ರಾಮಗಳ ಜೋಡೆತ್ತಿನ ಕೃಷಿಕರ ಪಾದಪೂಜೆ ಕೈಗೊಂಡ ನಂತರ ಬಸವಕಲ್ಯಾಣದ‌ ಪರುಷ ಕಟ್ಟೆಯಿಂದ ಕೂಡಲ ಸಂಗಮದ ವರೆಗೆ 13 ದಿನಗಳ ಕಾಲ ಏಕಾಂಗಿಯಾಗಿ ಪಾದಯಾತ್ರೆ ಕೈಗೊಂಡ‌ ಅನುಭವ ಹಾಗೂ ವಿಜಯಪುರದಿಂದ ಬೆಂಗಳೂರು ವರೆಗೆ ಏಕಾಂಗಿಯಾಗಿ 560 ಕಿಲೋಮೀಟರ್ ಪಾದಯಾತ್ರೆ ಕೈಗೊಂಡ ಅನುಭವದ ಆಧಾರದ ಮೇಲೆ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಬಸವರಾಜ ಎನ್. ಬಿರಾದಾರ

ನಂದಿ‌ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ

Saturday, June 20, 2026

.




ಪೂಜ್ಯರು ನಂದಿ ವಿಜ್ಞಾನ ಅರಿತು ಒಂದಾದರೆ ವಿಶ್ವಕ್ಕೆ ಒಳಿತೆಂದು ಕೂಡಲ ಸಂಗಮನಾಥನ ಮುಂದಿರುವ ಜೋಡಿ ನಂದಿಗಳು ಕೂಗಿ ಹೇಳುತ್ತಿವೆಯೇ?

ಭೂಮಿಯು ಇಂದು ನಿಧಾನ ಹಾಗೂ ತೀವ್ರಗತಿ ಎಂಬ ಎರಡು ರೀತಿಯಿಂದ ವಿಷವಾಗುತ್ತಿದೆ. ತೈಲ ಆಧಾರಿತ ಯಂತ್ರ ಹಾಗೂ ರಾಸಾಯನಿಕಗಳ ಬಳಕೆ ಹೆಚ್ಚಾಗಿ ನಂದಿ ಕೃಷಿ ಸಂಸ್ಕೃತಿ ನಾಶವಾದಂತೆ ವಿಶ್ವದ ಬಹು ಜನರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ತುತ್ತಾಗುವುದನ್ನು ವಿಶ್ವ ಸಂಸ್ಥೆಯ ವರದಿ ತಿಳಿಸುತ್ತಿರುವುದು ಭೂಮಿಯು ನಿಧಾನ ಗತಿಯಲ್ಲಿ ವಿಷವಾಗುತ್ತಿರುವುದರ ಸೂಚಕವಾಗಿದೆ. ಯುದ್ಧಗಳು ಹಾಗೂ ಪ್ರಕೃತಿ ವಿಕೋಪಗಳಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಜನರಲ್ಲಿ ಆಕ್ರೋಶ ಹೆಚ್ಚಾಗಿ ವ್ಯವಸ್ಥೆಯ ಮೇಲಿನ ಹಿಡಿತ ತಪ್ಪುವ ಸಮಯವು ತೀವ್ರಗತಿಯ ವಿಷವಾಗಿದೆ. ಈ ಸಂದರ್ಭದಲ್ಲಿ ಭೂಮಿ ವಿಷಪೂರಿತ ಆಗುತ್ತಿರುವುದನ್ನು ತಡೆಯುವ ಶಕ್ತಿ ವೀರಶೈವ ಲಿಂಗಾಯತ ಪೂಜ್ಯರಿಗೆ ಮಾತ್ರವಿದೆ. ಏಕೆಂದರೆ, ಇಂದು ಭೂಮಿಯ ಮೇಲೆ ನಂದಿ ಕೃಷಿ ಸಂಸ್ಕೃತಿಗೆ ಪೂರಕ ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದ ಜನರಲ್ಲಿ ಮೊದಲ ಸ್ಥಾನದಲ್ಲಿ ಇರುವವರು ವೀರಶೈವ ಲಿಂಗಾಯತರು ಎಂಬುದು ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ‌ ತಿಳಿಯುತ್ತದೆ.

ಶಿವಲಿಂಗದ ಮುಂದೆ, ಮಠಗಳಲ್ಲಿ ಹಾಗೂ ಬಹು ಜನರ ಮನೆಯ ಜಗುಲಿಯ ಮೇಲೆ‌ ನಂದಿ ಮೂರ್ತಿಗಳನ್ನು ಸ್ಥಾಪಿಸಿ ಪೂಜೆ ಮಾಡುವುದು ನಂದಿ ಕೃಷಿ ಸಂಸ್ಕೃತಿಯ ಮೇಲೆ ನಾಗರೀಕತೆಯ ಭವಿಷ್ಯ ನಿಂತಿದೆ ಎಂಬುದರ ಸೂಚಕವಾಗಿವೆ. ಈ ವೈಜ್ಞಾನಿಕ ಸತ್ಯವನ್ನು ಬಹು ಜನರು ಅರಿತು ಹೆಜ್ಜೆ ಇಟ್ಟರೆ ಮಾತ್ರ ಮುಂದೆ ಎಲ್ಲರಿಗೂ ಒಳ್ಳೆಯ ಭವಿಷ್ಯವಿದೆ. ನಂದಿ ಕೃಷಿಕರ ಶ್ರಮದಿಂದ ಬೆಳೆದ ನಾಗರೀಕ ಸಮಾಜದಿಂದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಜನ್ಮ ತಾಳಿವೆ ಎಂಬುದು ಇತಿಹಾಸ ಹಾಗೂ ಆಧುನಿಕ ವಿಜ್ಞಾನದಿಂದ ಸ್ಪಷ್ಟವಾಗಿ ತಿಳಿಯುತ್ತಿದೆ. ಶಿವಾಲಯಗಳು ಪರಕೀಯರಿಂದ ಧ್ವಂಸವಾದಾಗ ಜನರು ಚದುರಿ ಹೋದರೂ ಕೂಡ ನಂದಿ ಕೃಷಿ ಸಂಸ್ಕೃತಿ ಉಳಿದು ಬೆಳೆಯಬೇಕು ಎಂಬ ದೂರದೃಷ್ಟಿಕೋನದಿಂದ ವಿಶ್ವಗುರು ಬಸವಣ್ಣನವರು ಇಷ್ಟಲಿಂಗ ಪೂಜಾ ಸಂಪ್ರದಾಯ ಮುನ್ನೆಲೆಗೆ ತಂದಿರುವುದು ಸಾರ್ಥಕವಾಗಿದೆ.

ಹಲವಾರು ಶತಮಾನಗಳಿಂದ ನಮ್ಮ ಪೂಜ್ಯರು ಉಳಿಸಿ ಬೆಳೆಸಿಕೊಂಡು ಬಂದಿರುವ ನಂದಿ ಕೃಷಿ ಸಂಸ್ಕೃತಿ ಇಂದು ವಿನಾಶದ ಅಂಚಿಗೆ ಬಂದು ತಲುಪಿರುವುದು ಭವಿಷ್ಯದ ಕರಾಳ ದಿನಗಳ ಮುನ್ಸೂಚನೆಯಾಗಿದೆ. ನಂದಿ ಕೃಷಿ ಸಂಸ್ಕೃತಿ ನಾಶವಾದಂತೆ ಪ್ರತಿ ಗ್ರಾಮಗಳಲ್ಲಿ ಔಷಧಿಗಳಿಲ್ಲದ ಮನೆಗಳನ್ನು ಹುಡುಕುವುದು ಅಸಾಧ್ಯ ಎಂಬ ಹಂತಕ್ಕೆ ಬಂದು ತಲುಪಿದ್ದೇವೆ. ಈ ಸತ್ಯದ ಅರಿವು ಗ್ರಾಮಗಳ ಬಹು ಜನರಿಗೆ ಆಗುತ್ತಿದೆ. ಕೊನೆಗೆ ಲಿಂಗ ಪೂಜೆಗೆ ಅವಶ್ಯವಿರುವ ಶುದ್ಧವಾದ ನೀರು ದೊರೆಯುವುದು ಕೂಡ ಕಷ್ಟವೆಂಬ ಹಂತಕ್ಕೆ ತಲುಪಿದ್ದೇವೆ. ಎತ್ತಿನಿಂದ ಉಳುಮೆ ಮಾಡುವುದು ಕಡಿಮೆಯಾದಂತೆ ಭೂಮಿ ಬಂಡೆಯಂತಾಗಿ ನೀರು ಇಂಗುವಿಕೆ ಪ್ರಮಾಣ ಕಡಿಮೆಯಾಗಿ ಹಳ್ಳಗಳು ಬತ್ತುತ್ತಾ ಚರಂಡಿ ರೂಪ ತಾಳುತ್ತಿರುವುದನ್ನು ಕಾಣುತ್ತಿದ್ದೇವೆ. ನಂದಿ ಕೃಷಿ ಮರೆತು ಅಣೆಕಟ್ಟುಗಳಿಂದ ನೀರು ನಿಲ್ಲಿಸಲು ಆದ್ಯತೆ ನೀಡಿದಂತೆ ಕರ್ನಾಟಕ ರಾಜ್ಯದ ಪ್ರಮುಖ 12 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ಬಂದು ತಲುಪಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಇದೇ ನದಿಗಳ ನೀರನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ಅನೇಕ ನಗರ ಹಾಗೂ ಗ್ರಾಮಗಳ ಜನರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಒಮ್ಮೆ ಯೋಚಿಸಿ ಹೆಜ್ಜೆ ಇಡಬೇಕಾಗಿದೆ.

ನಂದಿ ಕೃಷಿ ನಾಶವಾದಂತೆ ಕುಡಿಯುವ ನೀರು ಅಶುದ್ಧವಾಗಿ ಕೊನೆಗೆ ಅತ್ಯಂತ ಪರಿಶುದ್ಧ ವಸ್ತುಗಳ ಸಂಗಮದ ಸಂಕೇತವಾದ ಲಿಂಗ ಪೂಜೆಗೆ ಮೊದಲ ಅವಶ್ಯಕತೆಯಾದ ಶುದ್ಧ ನೀರು ಎಲ್ಲ ಲಿಂಗ ಪೂಜಕರಿಗೆ ದೊರೆಯದ ಪರಿಸ್ಥಿತಿ‌ ನಿರ್ಮಾಣವಾಗುತ್ತಿದೆ. ನಂದಿ ಕೃಷಿಕರ ಶ್ರಮಕ್ಕೆ ಬೆಲೆ ನೀಡುವ ವ್ಯವಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋದರೆ ಮಾತ್ರ ಶಿವಲಿಂಗ-ಇಷ್ಟಲಿಂಗ ಪೂಜೆಗೆ ಬೇಕಾದ ವಸ್ತುಗಳು ಪರಿಶುದ್ಧ ರೂಪದಲ್ಲಿ ಯಥೇಚ್ಛವಾಗಿ ಎಲ್ಲ ಕಡೆ ದೊರೆಯುತ್ತವೆ ಎಂಬುದು ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ ತಿಳಿಯುತ್ತಿದೆ. 

ಕಳೆದ ಕೆಲವು ದಶಕಗಳಿಂದ ನಂದಿ ಕೃಷಿಕರ ಶ್ರಮವನ್ನು ಕಡೆಗಣಿಸಿ ತೈಲ ಆಧಾರಿತ ಯಂತ್ರ ಹಾಗೂ ರಾಸಾಯನಿಕಗಳಿಗೆ ಮಹತ್ವ ನೀಡುತ್ತಾ ಬಂದ ಕಾರಣ ಕರ್ನಾಟಕ ರಾಜ್ಯದ 60 ಪ್ರತಿಶತ ಭೂಮಿ ಅಸಹಜ ಸ್ಥಿತಿಗೆ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು ಹೇಳಿದ್ದಾರೆ. ನಂದಿ ಕೃಷಿಯ ಮಹತ್ವವನ್ನು ಎತ್ತಿ ಹಿಡಿಯುವುದರಲ್ಲಿ ಇಂದಿನ ಕೃಷಿ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ ಎಂಬುದು ಅಲ್ಲಿರುವ ಶಿಕ್ಷಣ ಪದ್ಧತಿಯಿಂದ ತಿಳಿಯುತ್ತಿದೆ. ಕಳೆದ 20 ವರ್ಷಗಳಲ್ಲಿ ಕೃಷಿ ವಿಶ್ವವಿದ್ಯಾಲಯಗಳು ನಂದಿ ಕೃಷಿಯನ್ನು ಉಳಿಸಲು ಯಾವ ಕೊಡುಗೆ ನೀಡಿವೆ? ಎಂಬ ಪ್ರಶ್ನೆಗೆ ಉತ್ತರವನ್ನು ಪಡೆದು ಕೃಷಿ ವಿಶ್ವವಿ

ದ್ಯಾಲಯಗಳನ್ನು ಸರಿ ದಾರಿಗೆ ತರುವ ಹಕ್ಕು ವೀರಶೈವ ಲಿಂಗಾಯತ ಮಠಾಧೀಶರಿಗಿದೆ. ಏಕೆಂದರೆ, ಕಳೆದ 9 ಶತಮಾನಗಳಲ್ಲಿ ಪರಕೀಯರಿಂದ‌ ಅನೇಕ ದಾಳಿಗಳಾದರೂ ಕೂಡ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದ ಕೀರ್ತಿ ವೀರಶೈವ ಲಿಂಗಾಯತ ಮಠಾಧೀಶರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಎಲ್ಲ ಮಠಗಳಲ್ಲಿ ನಂದಿ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸುವುದನ್ನು ಕಾಣುತ್ತೇವೆ.

ಶಿವಲಿಂಗ-ಇಷ್ಟಲಿಂಗ ಪೂಜೆಗೆ ಬೇಕಾದ ಶುದ್ಧವಾದ ನೀರು ಕೂಡ ದೊರೆಯದ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ ಹಲವು ಶತಮಾನಗಳಿಂದ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಮಠಗಳ ಪೂಜ್ಯರು ಒಂದಾಗಿ ವೈಜ್ಞಾನಿಕವಾಗಿ ಚಿಂತನೆ ಮಾಡಿ ಹೆಜ್ಜೆ ಇಡಬೇಕಾದ ಅವಶ್ಯಕತೆ ಬಂದೊದಗಿದೆ. ನಂದಿ ಕೃಷಿ ಸಂಸ್ಕೃತಿ ಮಹತ್ವವನ್ನು ಅರಿಯದೆ ಹೆಜ್ಜೆ ಇಡುತ್ತಿರುವ ಕೃಷಿ ವಿಶ್ವವಿದ್ಯಾಲಯಗಳಿಂದ ಸಂವಿಧಾನದ ಮೂಲ ಬೇರುಗಳಾದ ನಂದಿ ಕೃಷಿಕರು ಅಳಿವಿನ ಅಂಚಿಗೆ ಬಂದು ತಲುಪಲು ಕಾರಣವಾಗುತ್ತಿದೆ. 

ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಜವಾಬ್ದಾರಿಯನ್ನು ಅರಿಯದೆ ನಡೆಯುತ್ತಿರುವ  ಕಾರಣ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ಕೂಡ ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ನಂದಿ ಕೃಷಿಕರ ಮಹತ್ವದ ಕುರಿತು ಅರಿವು ಮೂಡಿಸುವುದರಲ್ಲಿ ಇಂದಿನ ವಿದ್ಯಾ ಸಂಸ್ಥೆಗಳು ವಿಫಲವಾದ ಕಾರಣ ಜಗತ್ತಿನಲ್ಲಿ ಭಾರತವು ಮಾಂಸ ಉತ್ಪಾದನೆಯಲ್ಲಿ ಎರಡನೇ ಸ್ಥಾನಕ್ಕೆ ಬಂದು ತಲುಪಿದೆ. ನಾಗರೀಕತೆಯನ್ನು ಉಳಿಸಿ‌ ಬೆಳೆಸಿ ಕೊನೆಗೆ ಭಾರತದ ಸಂವಿಧಾನ ನಿರ್ಮಾಣಕ್ಕೆ ಶ್ರೇಷ್ಠ ಕೊಡುಗೆ ನೀಡಿದ ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ವ್ಯವಸ್ಥೆ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಮರಳಿ ವೀರಶೈವ ಲಿಂಗಾಯತ ಮಠಾಧೀಶರು ಹೊತ್ತರೆ ಮಾತ್ರ ಭಾರತ ದೇಶಕ್ಕೆ ಒಳ್ಳೆಯ ಭವಿಷ್ಯವಿದೆ‌ ಎಂಬುದನ್ನು ಎಲ್ಲ ಮಠ-ಮಂದಿರಗಳಲ್ಲಿರುವ ನಂದಿ ಮೂರ್ತಿಗಳು ಕೂಗಿ ಹೇಳುತ್ತಿವೆ.

ನಂದಿ ಕೃಷಿ ಪುನಶ್ಚೇತನಕ್ಕಾಗಿ ಪೂಜ್ಯರಿಂದ ನಂದಿ ಹಕ್ಕೊತ್ತಾಯ 

ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಜ್ಞಾವಂತ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಗೆ ರಾಜ್ಯದ ಅನೇಕ ಪೂಜ್ಯರು ಆಶಿರ್ವಾದ ಮಾಡುತ್ತಾ ಬಂದಿರುವುದರಿಂದ ಕಳೆದ 3 ವರ್ಷಗಳಿಂದ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲು ಸಾಧ್ಯವಾಗಿದೆ. ಮುಂದುವರೆದು, 108 ಗ್ರಾಮಗಳ ಜೋಡೆತ್ತಿನ ಕೃಷಿಕರ ಸಮಾವೇಶವನ್ನು‌ ಪೂಜ್ಯರ ಸಾನಿಧ್ಯದಲ್ಲಿ ಆಯೋಜಿಸಿ ಈ ಕೆಳಗಿನ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು 2026ರ ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಗಿದೆ. 

1. ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರಬೇಕು.

2. ರಾಜ್ಯದ 10 ಪ್ರತಿಶತ ಬಜೆಟ್ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆಹಾರ, ನಂದಿ ಗೊಬ್ಬರ ಹಾಗೂ ನಂದಿ ಆರೋಗ್ಯ ವರ್ಧಕಗಳ ಉತ್ಪಾದನೆಗೆ ಉತ್ತೇಜನ ನೀಡುವ ಕಾನೂನು ಜಾರಿಗೆ ತರಬೇಕು.

ಮುಂಬರುವ ರಾಜ್ಯ ಬಜೆಟ್ ನ 10% (ಸುಮಾರು 50 ಸಾವಿರ ಕೋಟಿ) ಹಣವನ್ನು ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ಶಕ್ತಿಯಿಂದ ಗ್ರಾಮಗಳನ್ನು ಸ್ವಾವಲಂಬಿ ಗೊಳಿಸಬಹುದಾದ ಹಾಗೂ ಪಂಚ ಮಹಾಭೂತಗಳನ್ನು ರಕ್ಷಿಸಬಹುದಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂಬ ಹಕ್ಕೊತ್ತಾಯ ರಾಜ್ಯದ ಎಲ್ಲ ಪೂಜ್ಯರಿಂದ ಆಗಬೇಕಾಗಿದೆ. ಅಂದಾಗ ಮಾತ್ರ ಮರಳಿ ರೈತರು ಹಾಗೂ ಮಠಗಳ ನಡುವಿನ ಒಳ್ಳೆಯ ಭಾಂದವ್ಯ ವೃದ್ಧಿಯಾಗಿ ಸಂವಿಧಾನ ಭದ್ರವಾಗಿರಲು ಸಾಧ್ಯವಿದೆ.

ಸರ್ವ ಧರ್ಮಗಳ ಜನರ ಒಳಿತಿಗಾಗಿ ಪೂಜ್ಯರ 'ನಂದಿ‌ ನಿರ್ಧಾರ'  

ನಂದಿ ಕೃಷಿ ಪುನಶ್ಚೇತನಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಪ್ರಯತ್ನಿಸುವ ನಾಯಕರಿಗೆ ಪಕ್ಷಾತೀತವಾಗಿ ನಂಬಿದ ದೇವರ ಸಾಕ್ಷಿಯಾಗಿ ‌ಮತ ನೀಡಿದರೆ ಮಾತ್ರ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬುದರ ಕುರಿತು ಭಕ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲ ಮಠಗಳ ಮೂಲಕ ಹಮ್ಮಿಕೊಳ್ಳುವ ನಿರ್ಧಾರವನ್ನು ಎಲ್ಲ ಪೂಜ್ಯರು ಒಂದುಗೂಡಿ ತೆಗೆದುಕೊಳ್ಳುವ ನಿರ್ಧಾರವೇ 'ನಂದಿ ನಿರ್ಧಾರ' ವಾಗಿದೆ.

                                        

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com

.............................................

ಬಸವರಾಜ ಎನ್. ಬಿರಾದಾರ

ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ, 9449303880

 

Sunday, June 14, 2026

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

 

ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ?

ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯಿಂದ ಜನ್ಮ ತಾಳಿದ ಬಸವಣ್ಣನವರು ಬಸವ ಕಲ್ಯಾಣಕ್ಕೆ ಬಂದು ಪರುಷ ಕಟ್ಟೆಯ ಮೇಲೆ ನ್ಯಾಯ ಪಂಚಾಯತಿ ಮಾಡುತ್ತಾ ವಿಶ್ವಕ್ಕೆ ಅನ್ವಯವಾಗುವ ನಂದಿ ತತ್ವ ಅಥವಾ ಎತ್ತಿನ ಕೃಷಿಕರ ತತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ ಕಾರಣಕ್ಕಾಗಿ ಅವರು ವಿಶ್ವಗುರು ಆದರು ಎಂಬುದು ಅವರೇ ಬರೆದ ವಚನವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ತಿಳಿಯುತ್ತದೆ.

ಕೃಷಿ ಕೃತ್ಯ ಕಾಯಕ ಮಾಡುವ 
ಸದ್ಭಕ್ತನ ಪಾದವ ತೋರಿಸಿ ಬದುಕಿಸಯ್ಯಾ,
ಆತನ ತನು ಶುದ್ಧ, ಆತನ ಮನ ಶುದ್ಧ, 
ಆತನ ಮನೆ ಹೊಕ್ಕು ಲಿಂಗಾರ್ಚನೆ ಮಾಡುವ ಗುರು ಪಾವನ ನೋಡಾ ಕೂಡಲ ಸಂಗಮದೇವ.

"ನಂದಿ ಅಥವಾ ಜೋಡೆತ್ತಿನ ಕೃಷಿಕರ ಪಾದಗಳಿಲ್ಲದಿದ್ದರೆ ನಾನು ಬದುಕಿರಲು ಸಾಧ್ಯವಿಲ್ಲ" ಎಂದು ಬಸವಣ್ಣನವರು ಹೇಳಿದ ಮಾತು 'ಗುರು' ಎಂಬ ಶಬ್ದ ಎತ್ತಿನ ಕೃಷಿಕರ ಶ್ರಮದಿಂದ ನಿರ್ಮಾಣವಾದ ನಾಗರೀಕ ಸಮಾಜದಿಂದ ಜನ್ಮ ತಾಳಿದೆ ಎಂಬುದು ತಿಳಿಯುತ್ತದೆ. ನಂದಿ ಶಕ್ತಿ ಹಾಗೂ ನಂದಿ ಕೃಷಿಕರ ಶ್ರಮದಿಂದ ಅಭಿವೃದ್ಧಿ ಹೊಂದಿದ ನಾಗರೀಕ ಸಮಾಜದ ಗುರುಗಳಿಂದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಜನ್ಮ ತಾಳಿದವು ಎಂಬುದು ಬಸವಣ್ಣನವರ ವಚನದಿಂದಲೇ ತಿಳಿಯುತ್ತದೆ. ಅದೇ ಕಾರಣಕ್ಕೆ ಶಿವಾಲಯದ ಶಿವಲಿಂಗದ ಮುಂದೆ ಹಾಗೂ ಲಿಂಗಾಯತರ ಜಗುಲಿಯ ಮೇಲೆ‌ ನಂದಿ ಮೂರ್ತಿ ಇಟ್ಟು ಪೂಜಿಸುವುದನ್ನು ಕಾಣುತ್ತೇವೆ. ಜೋಡೆತ್ತಿನ ಕೃಷಿಕರ ಶ್ರಮದಿಂದ ಜನ್ಮ ತಾಳಿದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಕೌಟುಂಬಿಕ ಹಾಗೂ ಪಾರಮಾರ್ಥಿಕವಾಗಿ ನಾಗರೀಕತೆ ಬೆಳೆಯಲು ದಾರಿ ತೋರುವ ಭೂಮಿಯ ಮೇಲಿನ  ಶ್ರೇಷ್ಠ ವೈಜ್ಞಾನಿಕ ಪೂಜಾ ಸಂಪ್ರದಾಯಗಳಾಗಿವೆ. ಕಳೆದ 50 ವರ್ಷಗಳಲ್ಲಿ ನಂದಿ ಕೃಷಿಕರ ಶ್ರಮವನ್ನು ನಿರ್ಲಕ್ಷಿಸಿ ಜಗತ್ತಿನಾದ್ಯಂತ ಜಾರಿಗೆ ತರುತ್ತಿರುವ ತೈಲ‌ ಶಕ್ತಿ ಆಧಾರಿತ ಯಂತ್ರ ಹಾಗೂ ರಾಸಾಯನಿಕಗಳಿಗೆ ಪೂರಕ ಕಾನೂನುಗಳಿಂದ ವಿಶ್ವದ ಅರ್ಧಕ್ಕಿಂತ ಹೆಚ್ಚು ಜನ ಹಲವು ರೋಗಗಳಿಗೆ ತುತ್ತಾಗಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಬಳಲುತ್ತಿದ್ದಾರೆ.  ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ನಂದಿ ಸಂಪತ್ತು ಕಾಸಾಯಿಖಾನೆ ಪಾಲಾಗದೆ ರೈತರ ಮನೆಗಳಲ್ಲಿ ಉಳಿಯುವಂತೆ ಮಾಡಿದರೆ ಮಾತ್ರ ಇಂದಿನ ನಾರೀಕತೆಯ ಜನರು ಸ್ವಾಸ್ಥ್ಯದಿಂದ ಜೀವನ ನಡೆಸಲು ಸಾಧ್ಯವೆಂಬುದು ವೈಜ್ಞಾನಿಕವಾಗಿ ತಿಳಿಯುತ್ತಿದೆ. ಈ ಸತ್ಯದ ಅರಿವನ್ನು ಮೂಡಿಸುವ ವಚನವನ್ನು ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಬರೆದಿರುವುದು ಅವರ ವೈಜ್ಞಾನಿಕ ಹಾಗೂ ದೂರದೃಷ್ಟಿಕೋನದ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.

ನಂದಿ ಕೃಷಿಕರ ಶ್ರಮದಿಂದ ಅಭಿವೃದ್ದಿ ಹೊಂದಿದ ಸಮಾಜದಲ್ಲಿ ವಿಶ್ವತೋಮುಖ ಚಿಂತನೆಗಳಿಗೆ ಅವಕಾಶ ದೊರೆತು ವಿಶ್ವ ಪ್ರಜ್ಞೆಯ ಸಂಕೇತವಾದ ಲಿಂಗದ ಪರಿಕಲ್ಪನೆ ಮುನ್ನೆಲೆಗೆ ಬರಲು ಪ್ರಾರಂಭಿಸುವುದು. ಕಳೆದ 5 ಸಾವಿರ ವರ್ಷಗಳಿಂದ ನಂದಿ ಕೃಷಿಕರ ಶ್ರಮದಿಂದ ನಾಗರೀಕತೆ ಬೆಳೆಯುತ್ತಾ ಬಂದಾಗ 6ನೇ ಶತಮಾನದಲ್ಲಿ ಶಿವಲಿಂಗದ ಪರಿಕಲ್ಪನೆ ಮುನ್ನೆಲೆಗೆ ಬಂದು ಶಿವಾಲಯಗಳು ನಿರ್ಮಾಣವಾಗಲು ಪ್ರಾರಂಭಿಸಿದವು. 12ನೇ ಶತಮಾನದ ಕಾಲಘಟ್ಟದಲ್ಲಿ ಉತ್ತರ ಭಾರತದಲ್ಲಿ ನಿರ್ಮಿತವಾದ ಶಿವಾಲಯಗಳು ಮುಸಲ್ಮಾನರ ದಾಳಿಯಿಂದ‌ ಧ್ವಂಸವಾಗಿ ಶಿವಲಿಂಗ ಪೂಜಾ ಸಂಸ್ಕೃತಿ ನಾಶವಾಗುತ್ತಿರುವುದನ್ನು ಗಮನಿಸಿದ ಬಸವಣ್ಣನವರು ಮುಂದೆ ದಕ್ಷಿಣ ಭಾರತದ ಶಿವಾಲಯಗಳು ಧ್ವಂಸವಾಗುವ ಕಾಲ ಹತ್ತಿರವಾಗುತ್ತಿದೆ ಎಂಬುದನ್ನು ದೂರ ದೃಷ್ಟಿಕೋನದಿಂದ ಅರಿತರು. ಶಿವಾಲಯಗಳು ಧ್ವಂಸವಾಗುವುದು ಎಂದರೆ ದೇಶದ ಕೃಷಿ ಸಂಸ್ಕೃತಿ ಹಾಗೂ ನಾಗರೀಕತೆ ನಾಶವಾಗುವುದು ಎಂದು ಅರ್ಥ. ಈ ಸತ್ಯವನ್ನು ಅರಿತ ಬಸವಣ್ಣನವರು ಇಷ್ಟಲಿಂಗ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದು ಇಷ್ಟಪಟ್ಟವರು ಇಷ್ಟಲಿಂಗ ಧರಿಸಿ ಲಿಂಗ ಪೂಜಾ ಸಂಪ್ರದಾಯವನ್ನು ತಮ್ಮ‌ ಮನೆಗಳಲ್ಲಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂಬುದು ಬಸವಣ್ಣನವರ ಉದ್ದೇಶವಾಗಿತ್ತು. ಜೊತೆಗೆ ನಮ್ಮ ನಂದಿ ಕೃಷಿ ಸಂಸ್ಕೃತಿಗೆ ಧಕ್ಕೆ ಆಗಬಹುದಾದ ಸಂದರ್ಭದಲ್ಲಿ ಲಿಂಗ ಹಾಗೂ ಜಗುಲಿಯ ಮೇಲಿರುವ ನಂದಿ ಆಧಾರಿತವಾಗಿ ಜನರು ಒಗ್ಗೂಡಿ ಪರಿಹಾರ ಕಂಡುಕೊಳ್ಳುತ್ತಾ ಸಾಗಿ, ನಾಗರೀಕತೆ ಬೆಳೆಯುತ್ತಾ ಸಾಗಬೇಕು ಎಂಬುದು ಬಸವಣ್ಣನವರ ದೂರದೃಷ್ಟಿಕೋನವಾಗಿತ್ತು.  ಕಳೆದ 9 ಶತಮಾನಗಳಲ್ಲಿ ಅನೇಕರು ನಮ್ಮ ಮಣ್ಣಿನ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಿದಾಗ ಜನರು ಚದುರಿ ಹೋದರೂ ಸಹ ಇಷ್ಟಲಿಂಗ ಪೂಜಾ ಸಂಪ್ರದಾಯದಿಂದ ಮರಳಿ ಒಂದಾಗಿ ಮಣ್ಣಿನ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ. ಇಷ್ಟಲಿಂಗ ಪೂಜಾ ಸಂಪ್ರದಾಯದಿಂದ‌ ಕಾಲ ಕಾಲಕ್ಕೆ ಅನೇಕ‌ ಶರಣರು ಹಾಗೂ ಸಂತರು ಉದಯಿಸಿ ನಮ್ಮ ದೇಸಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ಬಂದಿರುವುದರ ಸಾಕ್ಷಿಯಾಗಿ ಅನೇಕ ಬೃಹತ್ ನಂದಿ ದೇವಸ್ಥಾನಗಳು ನಿರ್ಮಾಣ ಆಗಿರುವುದನ್ನು ಅನೇಕ ಕಡೆ ಕಾಣುತ್ತೇವೆ. 

12ನೇ ಶತಮಾನದಲ್ಲಿ ಬಸವಣ್ಣನವರು‌ ನ್ಯಾಯ ಪಂಚಾಯಿತಿ ನಡೆಸುತ್ತಿದ್ದ ಪರುಷ ಕಟ್ಟೆ ಸುತ್ತಲೂ ಇರುವ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯದ ಅಂದಿನ ಮನೆಗಳು ನಾಶವಾಗಿ ಇಂದು ಮುಸಲ್ಮಾನರ‌ ಮನೆಗಳು ತಲೆ ಎತ್ತಿ ನಿಂತಿವೆ. ಬಸವಣ್ಣನವರ ಕಾಲದ ಪರುಷ ಕಟ್ಟೆಯ ವೈಭವ ಹಾಗೂ ಇಂದಿನ ಅದರ ದುಸ್ಥಿತಿಯನ್ನು ಅವಲೋಕನೆ ಮಾಡಿದರೆ ಬಸವವಣ್ಣನವರು ಯಾವ ಉದ್ದೇಶದಿಂದ ಇಷ್ಟಲಿಂಗ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದರು ಎಂಬುದು ನಮಗೆಲ್ಲ ಅರಿವು ಆಗುತ್ತದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿತ ವಿಶ್ವದ ಮೊದಲ ಸಂಸತ್ತು ಹಾಗೂ 21ನೇ ಶತಮಾನದಲ್ಲಿ  ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ರಚನೆಯ ಹಿಂದೆ ನಂದಿ ಕೃಷಿಕರ ಶ್ರಮ ಅಡಗಿದೆ  ಎಂಬುದಕ್ಕೆ ಸಂವಿಧಾನದಲ್ಲಿರುವ ಸಿಂಧೂ ನದಿ ನಾಗರೀಕತೆಯ ನಂದಿ ಮುದ್ರೆಯು ಸಾಕ್ಷಿಯಾಗಿದೆ. ಅಂದರೆ, ನಂದಿ ಕೃಷಿ ಸಂಸ್ಖರತಿಯಿಂದ ನಾಗರೀಕತೆ ಬೆಳವಣಿಗೆಗೆ ಶ್ರೇಷ್ಠ ಕೊಡುಗೆ ನೀಡುತ್ತಾ ಬಂದಿರುವ ವೀರಶೈವರು ಹಾಗೂ ಲಿಂಗಾಯತರು ಸಂವಿಧಾನ ರಚನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ ತಿಳಿಯುತ್ತದೆ. 

ಕಳೆದ ಎರಡು ಶತಮಾನದಲ್ಲಿ ಜಾರಿಯಾಗುತ್ತಾ ಬಂದಿರುವ ದೇಸಿ ಕೃಷಿ ಸಂಸ್ಕೃತಿಗೆ ವಿರುದ್ಧವಾದ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಹಾಗೂ ತೈಲ ಆಧಾರಿತ ಕೃಷಿಯಿಂದಾಗಿ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳಾದ ನಂದಿ ಅಥವಾ ಜೋಡೆತ್ತಿನ ಕೃಷಿಕರು ಅಳಿವಿನ ಅಂಚಿಗೆ ಬಂದು ನಿಲ್ಲುವಂತಾಗಿದೆ. ಬೇರುಗಳಿಲ್ಲದ ಮರವು ಹೇಗೆ ಫಲ ಕೊಡಲು ಸಾಧ್ಯವಿಲ್ಲವೋ ಅದೇ ರೀತಿ  ನಂದಿ ಕೃಷಿಕರೆಂಬ ಬೇರುಗಳಿಲ್ಲದೆ ಬಸವ ತತ್ವ ಯಾವುದೇ ಫಲ ಕೊಡದೆ ಸೊರಗುತ್ತಿದೆ.  ನಂದಿ ಕೃಷಿಕರ ಶ್ರಮ ಹಾಗೂ ಅವರು ನಾಗರೀಕತೆ ಬೆಳವಣಿಗೆಗೆ ನೀಡುತ್ತಾ ಬಂದಿರುವ ಶ್ರೇಷ್ಠ ಕೊಡುಗೆಯನ್ನು ಪರಿಗಣಿಸದೆ ವಿಶ್ವದ ಎಲ್ಲ ದೇಶಗಳು ಜಾರಿಗೆ ತರುತ್ತಿರುವ ಕಾನೂನು ಹಾಗೂ ಯೋಜನೆಗಳು ಇಂದಿನ ಬಸವ ತತ್ವ ಪ್ರತಿಪಾದಕರು ದಾರಿ ಕಾಣದೆ ಒದ್ದಾಡುವಂತೆ ಮಾಡುತ್ತಿದೆ. ಇಂದು ಅನೇಕ ಪೂಜ್ಯರ ನಡುವೆ ವಾದ ವಿವಾದಗಳು ನಡೆಯುತ್ತಿರುವುದಕ್ಕೆ ಮೂಲ‌ ಕಾರಣ ಬಸವ ತತ್ವಕ್ಕೆ ವಿರುದ್ಧವಾದ ವ್ಯವಸ್ಥೆ ವಿಶ್ವಾದ್ಯಾಂತ ನಿರ್ಮಾಣ ಆಗಿರುವುದಾಗಿದೆ. ಈ ಸತ್ಯವನ್ನು ಅರಿಯದೆ ಹೆಜ್ಜೆ ಇಡುವ ಅನೇಕ ದೇಶಗಳು ನಾಶವಾಗುವ ದಿನಗಳು ಹತ್ತಿರವಾಗುತ್ತಿವೆ.

ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿರುವ ತೈಲ ಸಂಕಷ್ಟಕ್ಕೆ ಮಠ ಮಂದಿರಗಳಲ್ಲಿರುವ ನಂದಿ ಮೂರ್ತಿಗಳ ಆಧಾರಿತವಾಗಿ ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಬಂದೊದಗಿದೆ. 

ಈ ಸಂದರ್ಭದಲ್ಲಿ ಬಸವ ಕಲ್ಯಾಣದ ಪರುಷ ಕಟ್ಟೆ ಕೂಗಿ ಹೇಳುತ್ತಿರುವ ನಂದಿ ಕೃಷಿ ಸಂಸ್ಕೃತಿಯ ಇತಿಹಾಸವನ್ನು ಆಲಿಸಿ ಹೆಜ್ಜೆ ಇಡಬೇಕಾಗಿದೆ. ಎಲ್ಲ ಪೂಜ್ಯರು ಬಸವ ತತ್ವದ ಮೂಲ ಬೇರುಗಳಾದ ನಂದಿ ಕೃಷಿಕರಿಗೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಒಂದಾಗಿ ಹೆಜ್ಜೆ ಇಟ್ಟು ನಂದಿ ಸಂತತಿ ರೈತರ ಮನೆಗಳಲ್ಲಿ ಉಳಿಸಲು ಪ್ರಯತ್ನಿಸಿದರೆ ಮಾತ್ರ ಬಸವಣ್ಣನವರು ದೂರದೃಷ್ಟಿಕೋನದಿಂದ ಇಟ್ಟ ಹೆಜ್ಜೆ ಇಂದು ಸಾರ್ಥಕ ರೂಪ ತಾಳುತ್ತದೆ. ಇದು ವಿಶ್ವ ಮಟ್ಟದಲ್ಲಿ ಇಡುವ ಕ್ರಾಂತಿಕಾರಕ ಹೆಜ್ಜೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ, ಭಾರತದ ಸಂವಿಧಾನ ಹಾಗೂ ವಿಶ್ವದ ಬಹು ಜನರ ಭವಿಷ್ಯ ವೀರಶೈವ ಲಿಂಗಾಯತ ಪೂಜ್ಯರು ಇಡುವ ಮುಂದಿನ ಹೆಜ್ಜೆಯ ಮೇಲೆ ನಿಂತಿದೆ.

ನಂದಿ ಶಕ್ತಿಯು ಭೂಮಿಯ ಜೀವಂತಿಕೆಯನ್ನು ಹೆಚ್ಚಿಸುತ್ತಾ ಎಲ್ಲ ಧರ್ಮಗಳು ಉಳಿಯುವಂತೆ ಮಾಡುವುದು. ತೈಲ‌ ಶಕ್ತಿಯು ಭೂಮಿಯ ಜೀವಂತಿಕೆಯನ್ನು ನಾಶ ಮಾಡುತ್ತಾ ಎಲ್ಲ ಧರ್ಮ‌ಗಳು ನಾಶವಾಗುವಂತೆ ಮಾಡುವುದು. ಹಾಗಾಗಿ, ಅರಿವಿನ ಕೊರತೆಯಿಂದ ಇತಿಹಾಸದಲ್ಲಿ ಆಗುತ್ತಾ ಬಂದಿರುವ ಪ್ರಮಾದವನ್ನು ಸರಿಪಡಿಸಲು ವೈಜ್ಞಾನಿಕ ಚಿಂತನೆಗಳು ಜರುಗಬೇಕಾಗಿವೆ. ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಮೂಲಕ ನಂದಿ ಕೃಷಿ ಪುನಶ್ಚೇನದ ಕುರಿತು ಹಲವು ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಾಡಿನ ಅನೇಕ ಪೂಜ್ಯರು ಆಶಿರ್ವಾದ ಮಾಡುತ್ತಾ ಬಂದಿರುವ ಕಾರಣ ರಾಜ್ಯ ಮಟ್ಟದಲ್ಲಿ ಅಭಿಯಾನ ಹೆಸರುವಾಸಿಯಾಗಿದೆ. ಮುಂದುವರೆದು 108 ಗ್ರಾಮಗಳ ನಂದಿ ಕೃಷಿಕರ ಸಮಾವೇಶ ಆಯೋಜಿಸಿ ಈ‌ ಕೆಳಗಿನ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 

ಸರ್ಕಾರಕ್ಕೆ ನಂದಿ ಕೃಷಿಕರ ಹಕ್ಕೊತ್ತಾಯ: 

1. ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿ ಗೊಳಿಸಿ.

2. ನಂದಿ ಕೃಷಿ ಪುನಶ್ಚೇತನಕ್ಕಾಗಿ ರಾಜ್ಯದ 10 ಪ್ರತಿಶತ ಬಡ್ಜೆಟ್ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆರೋಗ್ಯ ವರ್ಧಕಗಳು ಹಾಗೂ ನಂದಿ ಗೊಬ್ಬರಗಳ ತಯಾರಿಕೆಗೆ ಉತ್ತೇಜನ ನಿಡುವ ಕಾನೂನು ಜಾರಿ ಗೊಳಿಸಿ.

 ನಂದಿ ಕೃಷಿಕರಿಗೆ ನ್ಯಾಯ ಒದಗಿಸಲು ಪೂಜ್ಯರ "ನಂದಿ ನಿರ್ಧಾರ" 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅರಿವಿನ ಕೊರತೆಯಿಂದ ಸರ್ವರ ಒಳಿತಿನ ಬಸವ ತತ್ವದ ಮೂಲ ಬೇರಾದ‌ ನಂದಿ ಕೃಷಿ ನಾಶವಾಗುತ್ತಿದೆ. ಅದಕ್ಕಾಗಿ, ನಂದಿ ಕೃಷಿ ಪುನಶ್ಚೇತನಕ್ಕೆ ಪೂರಕ ಯೋಜನೆ ಹಾಗೂ ಕಾನೂನು ಜಾರಿಗೆ ತರಲು ಪ್ರಯತ್ನಿಸುವ ನಾಯಕರಿಗೆ ನಂಬಿದ ದೇವರ ಸಾಕ್ಷಿಯಾಗಿ ಪಕ್ಷಾತೀತವಾಗಿ ಮತ ನೀಡಲು ಪೂಜ್ಯರು ತಮ್ಮ ಭಕ್ತರಿಗೆ ಅರಿವು ಮೂಡಿಸುವ "ನಂದಿ ನಿರ್ಧಾರ" ತೆಗೆದುಕೊಳ್ಳಬೇಕಾದ ಅವಶ್ಯಕತೆ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡಿ ಹೆಜ್ಜೆ ಇಡಬಹುದಾಗಿದೆ.


......................................

ಬಸವರಾಜ ಎನ್. ಬಿರಾದಾರ
ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ

Friday, June 12, 2026

ಬಸವ ಕಲ್ಯಾಣದ ಪರುಷ ಕಟ್ಟೆಯಿಂದ ಕೂಡಲ ಸಂಗಮದ ವರೆಗೆ ಪಾದಯಾತ್ರೆ

 


















ಬಸವ ಕಲ್ಯಾಣದ ಸುತ್ತಲಿನ 11 ಗ್ರಾಮಗಳ ಜೋಡೆತ್ತಿನ ಕೃಷಿಕರ ಪಾದಪೂಜೆ ಕಾರ್ಯಕ್ರಮ












ನಂದಿ ಸೇನೆ ರಥಯಾತ್ರೆ

 

































ಹೆಚ್ಚಿನ ಮಾಹಿತಿ ಗಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ

ಗುರು ವಿರಕ್ತ ಮಠಗಳ ಪೂಜ್ಯರು ಹಾಗೂ ಭಕ್ತರ ನಂದಿ ಮತ ಜಾಗೃತಿಯ ಮೇಲೆ ವಿಶ್ವದ ಭವಿಷ್ಯ ನಿಂತಿದೆಯೇ?

  ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಸಂಪೂರ್ಣವಾಗಿ ಭಾರತದಲ್ಲಿ ಸ್ಥಗಿತವಾದರೆ ಯಾವ ಗ್ರಾಮಗಳಲ್ಲಿ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಇರುವರೋ ಆ ಗ್ರಾಮ...